ಉದ್ಯಾನನಗರಿ ಸುತ್ತ `ಬಹದ್ದೂರ್`ಸಂಚಾರ
Posted date: 23 Tue, Apr 2013 – 10:29:34 AM

ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ ತನ್ನ ಎರಡನೇ ಕಾಣಿಕೆಯಾಗಿ ‘ಬಹದ್ದೂರ್’ ಚಿತ್ರವನ್ನು ನಿರ್ಮಿಸುತ್ತಿದೆ. ಈ ಮೊದಲು ಹ್ಯಾಟ್ರಿಕ್‌ಹೀರೋ ಶಿವರಾಜಕುಮಾರ್ ಅವರ ಅಭಿನಯದಲ್ಲಿ ‘ಅಂದರ್ ಬಾಹರ್’ ಎಂಬ ಚಿತ್ರ ಲೆಜೆಂಡ್ ಸಂಸ್ಥೆಯಿಂದ ನಿರ್ಮಾಣವಾಗಿದೆ. ರಜನೀಶ್, ಪ್ರಸಾದ್‌ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಮತ್ತು ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಉದ್ಯಾನನಗರಿ ಸುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.     
      ‘ಅದ್ದೂರಿ’ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಧ್ರುವಸರ್ಜಾ ಈ ಚಿತ್ರದ ನಾಯಕ. ರಾಧಿಕಾಪಂಡಿತ್ ನಾಯಕಿ. ‘ಅದ್ದೂರಿ’ ಅರ್ಜುನ್‌ಗೆ ಸಹಾಯಕರಾಗಿ ಹಾಗೂ ರಜನಿಕಾಂತ, ಪುಲಕೇಶಿ, ವರದನಾಯಕ ಮುಂತಾದ ಚಿತ್ರಗಳಿಗೆ ಹಾಡು ಬರೆದಿರುವ ಚೇತನ್‌ಕುಮಾರ್ ಈ ಚಿತ್ರದ ನಿರ್ದೇಶಕ. ‘ಬಹದ್ದೂರ್’ ಚೇತನ್‌ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ.
      ಅರ್ಜುನ್‌ಜನ್ಯರ ಸಂಗೀತವಿರುವ ಈ ಚಿತ್ರಕ್ಕೆ ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣವಿದೆ. ರವಿವರ್ಮ ಸಾಹಸ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಎ.ಹರ್ಷ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed